ಶಿಲುಬೆಯ ಗುರುತು-ಪ್ರೇಷಿತರ ವಿಶ್ವಾಸ ಸಂಗ್ರಹ-1 ಪರಲೋಕ ಪ್ರಾರ್ಥನೆ-3 ನಮೋ ಮರಿಯ ಪ್ರಾರ್ಥನೆ-ಪರಮತ್ರಿತ್ವಕ್ಕೆ ಸ್ತೋತ್ರದ ನಂತರ ಆಯಾ ದಿನದ ರಹಸ್ಯಗಳನ್ನು ಧ್ಯಾನಿಸುವುದು.
ಪ್ರತಿ ರಹಸ್ಯದ ಕೊನೆಯಲ್ಲಿ: ಓ ನನ್ನ ಯೇಸುವೇ ನನ್ನ ಪಾಪಗಳನ್ನು ಕ್ಷಮಿಸಿರಿ, ನರಕದ ಬೆಂಕಿಯಿಂದ ನಮ್ಮನ್ನು ಕಾಪಾಡಿರಿ. ಎಲ್ಲಾ ಆತ್ಮಗಳನ್ನು ವಿಶೇಷವಾಗಿ ನಿಮ್ಮ ದಯೆಯ ಅಗತ್ಯವಿರುವ ಆತ್ಮಗಳನ್ನು ಮೋಕ್ಷರಾಜ್ಯಕ್ಕೆ ಸೇರಿಸಿಕೊಳ್ಳಿರಿ.
ಸಂತೋಷದ ರಹಸ್ಯಗಳು (ಸೋಮವಾರ, ಶನಿವಾರ)
ಗಾಬ್ರಿಯೆಲ್ ದೂತನು ಮರಿಯಮ್ಮನವರಿಗೆ ಮಂಗಳವಾರ್ತೆಯನ್ನು ಹೇಳಿದನು.
ದೇವಮಾತೆಯು ಸಂತ ಎಲಿಜಬೇತಮ್ಮನವರನ್ನು ಸಂಧಿಸಿದರು.
ಯೇಸುಸ್ವಾಮಿಯು ದನದ ಕೊಟ್ಟಿಗೆಯಲ್ಲಿ ಜನಿಸಿದರು.
ಯೇಸುಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಅರ್ಪಿಸಿದರು.
ಮೂರು ದಿನ ಕಾಣದೇ ಹೋದ ಯೇಸುಬಾಲರು ದೇವಾಲಯದಲ್ಲಿ ಮಾತಾ ಪಿತೃಗಳಿಗೆ ಸಿಕ್ಕಿದರು.
ಜ್ಯೋತಿಯ ರಹಸ್ಯಗಳು (ಗುರುವಾರ)
ಯೇಸುಸ್ವಾಮಿ ಜೋರ್ಡಾನ್ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದರು.
ಕಾನಾ ಊರಿನ ಮದುವೆಯಲ್ಲಿ ಯೇಸು ಮೊದಲ ಸೂಚಕ ಕಾರ್ಯವನ್ನು ಮಾಡಿದರು.
ಯೇಸುಸ್ವಾಮಿ ದೇವರರಾಜ್ಯವನ್ನು ಘೋಷಿಸಿದರು.
ಯೇಸುಸ್ವಾಮಿ ರೂಪಾಂತರ ಹೊಂದಿದರು.
ಕಡೆಯ ಭೋಜನದ ಸಮಯದಲ್ಲಿ ಯೇಸುಸ್ವಾಮಿ ಪರಮಪ್ರಸಾದವನ್ನು ಸ್ಥಾಪಿಸಿದರು.
ದುಃಖದ ರಹಸ್ಯಗಳು (ಮಂಗಳವಾರ, ಶುಕ್ರವಾರ)
ಯೇಸುಸ್ವಾಮಿ ಗೆತ್ಸೆಮನಿ ತೋಪಿನಲ್ಲಿ ರಕ್ತದ ಬೆವರನ್ನು ಸುರಿಸಿದರು.
ಪ್ರಭುವಾದ ದೇವರೇ, ಸದಾ ಕನ್ನಿಕೆಯಾದ ಸಂತ ಮರಿಯಮ್ಮನವರ ಬಿನ್ನಹಗಳ ಮೂಲಕ, ನಿಮ್ಮ ದಾಸರಾದ ನಾವು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಿಂದಿರುವಂತೆಯೂ, ಇಹದ ಕಷ್ಟಗಳಿಂದ ಬಿಡುಗಡೆಯಾಗಿ, ಪರದ ನಿತ್ಯಾನಂದವನ್ನು ಸವಿಯುವಂತೆಯೂ ಅನುಗ್ರಹಿಸಿರಿ. ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.